ಒಂದು ಕಾಲದ ದೋಸ್ತು ಇವಾಗ ದುಷ್ಮನ್! ಮುನಿರತ್ನ ವಿರುದ್ಧ ತಿರುಗಿ ಬಿದ್ದರೇ ಎಸ್ ಟಿ ಸೋಮಶೇಖರ್
September 20, 20240 minute read
ಎಸ್ ಬಿ ಎಂ! ಹೌದು, ಆಪರೇಷನ್ ಕಮಲದ ಸಂದರ್ಭದಲ್ಲಿ ಕೇಳಿ ಬರುತ್ತಿದ್ದ ಮೂರು ಹೆಸರುಗಳಿವು. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಈ ಮೂರು ಶಾಸಕರು ಏಕಾಏಕಿ ಆಪರೇಷನ್ ಕಮಲಕ್ಕೆ ಒಳಗಾಗಿದ್ದು, ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರನ್ನೇ ಬೆಚ್ಚಿ ಬೀಳಿಸಿತ್ತು.ಅಂದ ಹಾಗೆ ಎಸ್ ಬಿ ಎಂ ಎಂದರೆ, ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ ಹಾಗೂ ಮುನಿರತ್ನ. ಕಾಂಗ್ರೆಸ್ ಪಕ್ಷದಲ್ಲಿ ಅದರಲ್ಲೂ ಸಿದ್ದರಾಮಯ್ಯಗೆ ಬಹಳ ಆತ್ಮೀಯರಾಗಿದ್ದ ಈ ಮೂವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಸೇರ್ಪಡೆ ಆದರು.
Tags