ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳಲ್ಲಿ ಅತಿಹೆಚ್ಚು ಮಳೆಯಿಂದ ಪ್ರವಾಹ ರೀತಿಯಲ್ಲಿ ಉಂಟಾಗುವ ಅತಿವೃಷ್ಟಿಯ ಹಾನಿಯನ್ನು ತಡೆಗಟ್ಟಲು ಒಟ್ಟು 5000 ಕೋಟಿ ರೂ. ಗಳ ಶಾಶ್ವತ ಯೋಜನೆಯನ್ನು ರೂಪಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.
ವಿಧಾನಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮುಂಗಾರು ಮತ್ತು ಖಾರಿಫ್ ಹಂಗಾಮಿನಲ್ಲಿ ಅಕಾಲಿಕ ಮತ್ತು ಅನಿಯಮಿತ ಮಳೆಯಿಂದ ಬೆಳೆಗಳು, ಜಾನುವಾರುಗಳು ಮತ್ತು ಆಸ್ತಿಪಾಸ್ತಿಗಳ ಮೇಲೆ ಪರಿಣಾಮ ಬೀರುವ ಹಾನಿಯ ಕುರಿತು ಯೋಜನೆ ಕುರಿತು ವಿವರಗಳನ್ನು ನೀಡಿದರು. 5,000 ಕೋಟಿ ರೂ.ಗಳಲ್ಲಿ, ವಿಶ್ವಬ್ಯಾಂಕ್ನಿಂದ 3,000 ಕೋಟಿ ರು. ಸಾಲವನ್ನು ಪಡೆಯಲು ಸರ್ಕಾರ ಉದ್ದೇಶಿಸಿದೆ